ದಾರಿ ಉದ್ದಕ್ಕೂ ಮನಸ್ಸು ಬೇಡಾ... ಬೇಡಾ... ಅನ್ನುತ್ತಿತ್ತು... ಆದರೆ ದೈವೇಚ್ಛೆಯನ್ನು ತಡೆಯಲು ನಾವ್ಯಾರು...? ಭಕ್ತರಿರುವಲ್ಲಿ ಪರಮಾತ್ಮ... "ಆನಂದೋ ಬ್ರಹ್ಮ ಇತಿ ವಿಜಿಜ್ಞಾಸಾತ್..." ಎನ್ನುವಂತೆ, ಜೀವಾತ್ಮ ಮತ್ತು ಪರಮಾತ್ಮದ ಸಮ್ಮಿಲನವೇ ಆನಂದ... ನನ್ನೊಳಗಿನ ಜೀವಾತ್ಮ, ಬಾಟ್ಳಿಯೊಳಗಿನ ಪರಮಾತ್ಮದಲ್ಲಿ ವಿಲೀನವಾಗಲು ಹಾತೊರೆಯುತ್ತಿತ್ತು... ಬೇಡಾ... ಬೇಡಾ... ಅಂದರೂ ಒಂದು ಬಾರ್ ಬಳಿ ನಿಲ್ಲಿಸಿದೆ... ವಿದ್ಯೆ, ವಿನಯ, ಸದ್ಬುದ್ಧಿ ಎಲ್ಲವನ್ನೂ ತನ್ನ ಇಷ್ಟಪುತ್ರರಿಗೆ ಕರ್ಮಾನುಸಾರ ದೊರಕಿಸಿಕೊಡುವ ಸರಸ್ವತಿಯ ಗಂಡನಾದ ಬ್ರಹ್ಮನ ಮೇಲಿನ ಸ್ಥುತಿ, "ಬ್ರಹ್ಮಾ ನಿಂಗೆ ಜೋಡಸ್ತೀನಿ..." ಅನ್ನೋ ಹಾಡು ರೇಡಿಯೋದಲ್ಲಿ ಬರಲಾರಂಭಿಸಿದಾಗ, ಹೆಂಡವನ್ನು ಮುಟ್ಟಿದ ಒಬ್ಬ ಸರ್ವರ್ನ ಕೈಗಳು ವಾಲ್ಯೂಮನ್ನು ಏರಿಸಿತು... ಒಳಗೆ ಹೋಗಿ ಹಳೇ ಸನ್ಯಾಸಿಯ ಪಾದಕ್ಕೆ ಎರುಗಿ ಆ ಮುಕ್ಕಾಲುವಾಸಿ ವಿಷ ಮತ್ತು ಕಾಲುವಾಸಿ ಅಮೃತವನ್ನು ಮುಕ್ಕಾಲುವಾಸಿ ಖಾಲಿ ಆಗುವವರೆಗೂ ಕುಡಿದೆ... ಮಧ್ಯೆ ಮಧ್ಯೆ ಲೈಟರ್ನ ದೀಪದಿಂದ ಸಿಗರೇಟಿನ ಧೂಪ ಹತ್ತಿಸಿ, ಉಪ್ಪಿನಕಾಯಿ, ಕಡಲೇಬೀಜಗಳ ನೈವೇದ್ಯವನ್ನು ನನ್ನನ್ನಾವರಿಸಿದ ಪರಮಾತ್ಮಕ್ಕೆ ನೈವೇದ್ಯ ಮಾಡುತ್ತಾ, ನಿಲ್ಲಲೂ ಆಗದೆ... ಕೂಡಲೂ ಆಗದಿರುವ ಆ ಸಮಯದಲ್ಲಿ ಬೈಕು ಏರಿ ನನ್ನ ಪ್ರಯಾಣ ಬೆಳೆಸಿದೆ... ಭೃಂಗದ ಬೆನ್ನೇರಿ... ಎಂಬ ಪದ... ಹಾಗೇ ತಲೆಯಲ್ಲಿ ಎಂದೂ ಬೇಯದ ದೋಸೆಯಂತೆ ಮಗುಚಾಕಿಕೊಂಡೇ ಇತ್ತು... "ಆಹಾ... ಭೃಂಗದ ಬೆನ್ನೇರಿ... ಎಂಥಾ ಕವಿತಾ ವಿಲಾಸ..." ಭೃಂಗದ ಬೆನ್ನನ್ನೇರುವುದು ಅಂದರೇನು... ಅದನ್ನು ಸವಾರಿ ಮಾಡುವುದು ಅಂದರೇನು... ರವಿ ಕಾಣದನ್ನು ಕವಿ ಕಾಣುತ್ತಾನೆ,,, ಆದರೆ ಕವಿಯೂ ಕಾಣದ್ದನ್ನು ಕುಡುಕ ಕಾಣುತ್ತಾನೆ... ನಾನು ಓಡಿಸುತ್ತಿದ್ದ ಬುಲೆಟ್ ನನಗೆ ಆ ಅನುಭವವನ್ನು ಕೊಡಲು ಪ್ರಾರಂಭಿಸಿತು... ನೋಡ ನೋಡುತ್ತಿದ್ದಂತೆಯೇ ಮನೆಯು ಬಂದೇಬಿಟ್ಟಿತು... ಅರೆ ಹೊಟ್ಟೆ ತಿಂದ ಹೊಟ್ಟೆ, ಟೈಟಾಗಲು ಸಾಕಾಗದಷ್ಟು ಎಣ್ಣೆ... ಮಜ ಇನ್ನೇನು ಸಿಗುತ್ತಿದೆ ಅನ್ನುವಾಗ ಮುಗಿದು ಹೋಗುವ ಪ್ರಯಾಣ... ಇವೆಲ್ಲವೂ ಶೂನ್ಯಕ್ಕೆ ಸಮಾನ... ಪೂರ್ಣತೆಯಲ್ಲಿ ಮಾತ್ರ ಸಂತೃಪ್ತಿ ಇರುತ್ತದೆ... ನ್ಯೂನ್ಯತೆಯಲ್ಲಿ ಶೂನ್ಯ ಮಾತ್ರವಿರುತ್ತದೆ... ಇನ್ನು ನಾನು ಗಾಡಿ ನಿಲ್ಲಿಸಲಾಗುವುದಿಲ್ಲಾ... ಒಂದೇ ಸಮನೇ ಗಾಡಿಯನ್ನು ಮೈಸೂರಿನ ಕಡೆಗೆ ತಿರುಗಿಸಿದೆ... ಆದರೆ ಅದೇಕೋ ಗೊತ್ತಿಲ್ಲ... ಮಾರನೆಯ ಮಧ್ಯಾಹ್ನ ಹೋಟಲ್ ರೂಮಿನಲ್ಲಿ ಎಚ್ಚರವಾದಾಗ ನಾನು ಕೊಯಂಬತ್ತೂರಿನಲ್ಲಿದ್ದೆ.
ಗುರುವಾರ, ಜೂನ್ 23, 2016
ಕುಡಿವೆಂ ಕ್ಷಣದಲಿ ರಮ್ಮ ನಾನ್
ದಾರಿ ಉದ್ದಕ್ಕೂ ಮನಸ್ಸು ಬೇಡಾ... ಬೇಡಾ... ಅನ್ನುತ್ತಿತ್ತು... ಆದರೆ ದೈವೇಚ್ಛೆಯನ್ನು ತಡೆಯಲು ನಾವ್ಯಾರು...? ಭಕ್ತರಿರುವಲ್ಲಿ ಪರಮಾತ್ಮ... "ಆನಂದೋ ಬ್ರಹ್ಮ ಇತಿ ವಿಜಿಜ್ಞಾಸಾತ್..." ಎನ್ನುವಂತೆ, ಜೀವಾತ್ಮ ಮತ್ತು ಪರಮಾತ್ಮದ ಸಮ್ಮಿಲನವೇ ಆನಂದ... ನನ್ನೊಳಗಿನ ಜೀವಾತ್ಮ, ಬಾಟ್ಳಿಯೊಳಗಿನ ಪರಮಾತ್ಮದಲ್ಲಿ ವಿಲೀನವಾಗಲು ಹಾತೊರೆಯುತ್ತಿತ್ತು... ಬೇಡಾ... ಬೇಡಾ... ಅಂದರೂ ಒಂದು ಬಾರ್ ಬಳಿ ನಿಲ್ಲಿಸಿದೆ... ವಿದ್ಯೆ, ವಿನಯ, ಸದ್ಬುದ್ಧಿ ಎಲ್ಲವನ್ನೂ ತನ್ನ ಇಷ್ಟಪುತ್ರರಿಗೆ ಕರ್ಮಾನುಸಾರ ದೊರಕಿಸಿಕೊಡುವ ಸರಸ್ವತಿಯ ಗಂಡನಾದ ಬ್ರಹ್ಮನ ಮೇಲಿನ ಸ್ಥುತಿ, "ಬ್ರಹ್ಮಾ ನಿಂಗೆ ಜೋಡಸ್ತೀನಿ..." ಅನ್ನೋ ಹಾಡು ರೇಡಿಯೋದಲ್ಲಿ ಬರಲಾರಂಭಿಸಿದಾಗ, ಹೆಂಡವನ್ನು ಮುಟ್ಟಿದ ಒಬ್ಬ ಸರ್ವರ್ನ ಕೈಗಳು ವಾಲ್ಯೂಮನ್ನು ಏರಿಸಿತು... ಒಳಗೆ ಹೋಗಿ ಹಳೇ ಸನ್ಯಾಸಿಯ ಪಾದಕ್ಕೆ ಎರುಗಿ ಆ ಮುಕ್ಕಾಲುವಾಸಿ ವಿಷ ಮತ್ತು ಕಾಲುವಾಸಿ ಅಮೃತವನ್ನು ಮುಕ್ಕಾಲುವಾಸಿ ಖಾಲಿ ಆಗುವವರೆಗೂ ಕುಡಿದೆ... ಮಧ್ಯೆ ಮಧ್ಯೆ ಲೈಟರ್ನ ದೀಪದಿಂದ ಸಿಗರೇಟಿನ ಧೂಪ ಹತ್ತಿಸಿ, ಉಪ್ಪಿನಕಾಯಿ, ಕಡಲೇಬೀಜಗಳ ನೈವೇದ್ಯವನ್ನು ನನ್ನನ್ನಾವರಿಸಿದ ಪರಮಾತ್ಮಕ್ಕೆ ನೈವೇದ್ಯ ಮಾಡುತ್ತಾ, ನಿಲ್ಲಲೂ ಆಗದೆ... ಕೂಡಲೂ ಆಗದಿರುವ ಆ ಸಮಯದಲ್ಲಿ ಬೈಕು ಏರಿ ನನ್ನ ಪ್ರಯಾಣ ಬೆಳೆಸಿದೆ... ಭೃಂಗದ ಬೆನ್ನೇರಿ... ಎಂಬ ಪದ... ಹಾಗೇ ತಲೆಯಲ್ಲಿ ಎಂದೂ ಬೇಯದ ದೋಸೆಯಂತೆ ಮಗುಚಾಕಿಕೊಂಡೇ ಇತ್ತು... "ಆಹಾ... ಭೃಂಗದ ಬೆನ್ನೇರಿ... ಎಂಥಾ ಕವಿತಾ ವಿಲಾಸ..." ಭೃಂಗದ ಬೆನ್ನನ್ನೇರುವುದು ಅಂದರೇನು... ಅದನ್ನು ಸವಾರಿ ಮಾಡುವುದು ಅಂದರೇನು... ರವಿ ಕಾಣದನ್ನು ಕವಿ ಕಾಣುತ್ತಾನೆ,,, ಆದರೆ ಕವಿಯೂ ಕಾಣದ್ದನ್ನು ಕುಡುಕ ಕಾಣುತ್ತಾನೆ... ನಾನು ಓಡಿಸುತ್ತಿದ್ದ ಬುಲೆಟ್ ನನಗೆ ಆ ಅನುಭವವನ್ನು ಕೊಡಲು ಪ್ರಾರಂಭಿಸಿತು... ನೋಡ ನೋಡುತ್ತಿದ್ದಂತೆಯೇ ಮನೆಯು ಬಂದೇಬಿಟ್ಟಿತು... ಅರೆ ಹೊಟ್ಟೆ ತಿಂದ ಹೊಟ್ಟೆ, ಟೈಟಾಗಲು ಸಾಕಾಗದಷ್ಟು ಎಣ್ಣೆ... ಮಜ ಇನ್ನೇನು ಸಿಗುತ್ತಿದೆ ಅನ್ನುವಾಗ ಮುಗಿದು ಹೋಗುವ ಪ್ರಯಾಣ... ಇವೆಲ್ಲವೂ ಶೂನ್ಯಕ್ಕೆ ಸಮಾನ... ಪೂರ್ಣತೆಯಲ್ಲಿ ಮಾತ್ರ ಸಂತೃಪ್ತಿ ಇರುತ್ತದೆ... ನ್ಯೂನ್ಯತೆಯಲ್ಲಿ ಶೂನ್ಯ ಮಾತ್ರವಿರುತ್ತದೆ... ಇನ್ನು ನಾನು ಗಾಡಿ ನಿಲ್ಲಿಸಲಾಗುವುದಿಲ್ಲಾ... ಒಂದೇ ಸಮನೇ ಗಾಡಿಯನ್ನು ಮೈಸೂರಿನ ಕಡೆಗೆ ತಿರುಗಿಸಿದೆ... ಆದರೆ ಅದೇಕೋ ಗೊತ್ತಿಲ್ಲ... ಮಾರನೆಯ ಮಧ್ಯಾಹ್ನ ಹೋಟಲ್ ರೂಮಿನಲ್ಲಿ ಎಚ್ಚರವಾದಾಗ ನಾನು ಕೊಯಂಬತ್ತೂರಿನಲ್ಲಿದ್ದೆ.
ಸೋಮವಾರ, ಫೆಬ್ರವರಿ 29, 2016
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)

